Class - 3 Class Assignment NO - 3
NATIONAL PUBLIC SCHOOL
JAYANAGAR
ACADEMIC YEAR - 2021 -22
CLASS ASSIGNMENT NO - 3
CLASS - 3 STD
SUBJECT - KANNADA
1. ಕೊಟ್ಟಿರುವ ಗದ್ಯಭಾಗವನ್ನು ಓದಿ, ಕೆಳಗಿನ ಪ್ರಶ್ನೆಗಳಿಗೆ, ಕೊಟ್ಟಿರುವ ಆಯ್ಕೆಗಳ ಸಹಾಯದಿಂದ ಉತ್ತರಿಸಿರಿ:
ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡ ಅನೇಕ ಮಹಾನ್ ವ್ಯಕ್ತಿಗಳಲ್ಲಿ ಸೂರ್ಯ ಸೇನರು ಕೂಡ ಒಬ್ಬರು. ಸೂರ್ಯಸೇನ್ ನಮ್ಮಲ್ಲಿ ಅನೇಕರಿಗೆ ಅಪರಿಚಿತ ವ್ಯಕ್ತಿ. ಭಾರತದ
ಸ್ವಾತಂತ್ರ್ಯಯುದ್ಧದಲ್ಲಿ ಹೋರಾಡಿದ ಮಹಾನ್ ವ್ಯಕ್ತಿ. ಬಂಗಾಳದಲ್ಲಿ ಜನಿಸಿದ ಇವರದ್ದು ಅಪ್ರತಿಮೆಯ ವ್ಯಕ್ತಿತ್ವ. 'ಮಾಸ್ಟರ್ ದಾ' ಎಂದೇ ಖ್ಯಾತರಾದ ಇವರನ್ನು ಬ್ರಿಟಿಷರು ಗಲ್ಲಿಗೇರಿಸಿದ್ದು ಜನವರಿ 12 ರಂದು. ಈ ನಮ್ಮ ಜಂಜಾಟದ ಜೀವನದಲ್ಲಿ ಮರೆತ ಅದೆಷ್ಟು ಮಹನೀಯರಲ್ಲಿ ಸೂರ್ಯಸೇನರು ಒಬ್ಬರು. ಬಿ. ಎ ವಿದ್ಯಾರ್ಥಿಯಾಗಿದ್ದಾಗ ಭಾರತ ಸ್ವಾತಂತ್ರ್ಯ ಸಮರದ ಬಗ್ಗೆ ಚೆನ್ನಾಗಿ ತಿಳಿಕೊಂಡಿದ್ದರು. 1918ರಲ್ಲಿ ಶಿಕ್ಷಕ ವೃತ್ತಿ ಆರಂಭಿಸಿದರು, ಶಿಕ್ಷಕರಾದರೂ ಕ್ರಾಂತಿಯ ಉರಿಯನ್ನು ಹೊತ್ತಿಸುವ ಬಯಕೆಯನ್ನು ಬಿಟ್ಟಿರಲಿಲ್ಲ. ತಮ್ಮ ವಿದ್ಯಾರ್ಥಿಗಳನ್ನು ತನ್ನ ಕ್ರಾಂತಿಕಾರಿ ಮನೋಭಾವಕ್ಕೆ ತಕ್ಕಂತೆ ರೂಪಿಸುತ್ತಿದ್ದರು.
1. ಸೂರ್ಯಸೇನರು ಎಲ್ಲಿ ಜನಿಸಿದರು?
2. ಸೂರ್ಯಸೇನ ರವರನ್ನು ಯಾವಾಗ ಗಲ್ಲಿಗೇರಿಸಿದರು?
3. ಸೂರ್ಯಸೇನರು ಬಿ.ಎ ವಿದ್ಯಾರ್ಥಿಯಾಗಿದ್ದಾಗ ಯಾವುದರ ಬಗ್ಗೆ ತಿಳಿದುಕೊಂಡಿದ್ದರು?
4. ಸೂರ್ಯಸೇನರು ಯಾವ ವೃತ್ತಿಯನ್ನು ಮಾಡುತ್ತಿದ್ದರು?
5. ಶಿಕ್ಷಕರಾದರೂ ಕೂಡ ಸೂರ್ಯಸೇನರು ಯಾವ ಬಯಕೆಯನ್ನು ಬಿಟ್ಟಿರಲಿಲ್ಲ?
6. 'ರಾಷ್ಟ್ರ' ಪದದ ಅರ್ಥ _________
7. 'ಕೂಸು' ಈ ಪದದ ಸಮಾನಾರ್ಥಕ ಪದ ___________
8. 'ಪುಸ್ತಕ' ಈ ಪದದ ಬಹುವಚನ ರೂಪ ಗುರುತಿಸಿ:
9. 'ಮೊದಲು' ಈ ಪದದ ವಿರುದ್ಧ ಪದ__________
10. ಕನ್ನಡ ವರ್ಣಮಾಲೆಯಲ್ಲಿ ಒಟ್ಟು ಅಕ್ಷರಗಳ ಸಂಖ್ಯೆ___________
11. ಕಸ್ತೂರಿ ಎಲ್ಲಿ ತುತ್ತೂರಿಯನ್ನು ಊದಿದನು?
12. ಮಾನವ ಕಾಡಿಗೆ ಏಕೆ ಬಂದನು?
13. ಆಡಿ ಬಾ ನನ ಕಂದ__________ ತೊಳೆದೇನ.
14. ಜಿ .ಪಿ ರಾಜರತ್ನಂ ರವರು ಬರೆದಿರುವ ಪದ್ಯದ ಹೆಸರು__________
15.'ಭಾರತದ ಸ್ವಾತಂತ್ರ್ಯ' ದಿನವನ್ನು ಎಂದು ಆಚರಿಸುತ್ತೇವೆ?